....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Wednesday 29 October 2014

ಶಾಲಾ ಮಟ್ಟದ ಕ್ರೀಡೋತ್ಸವ

              ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಮಕ್ಕಳನ್ನು ಆಯ್ಕೆ ಮಾಡಲು ನಮ್ಮ ಶಾಲೆಯಲ್ಲಿ ಶಾಲಾ ಮಟ್ಟದ ಕ್ರೀಡಾಕೂಟವನ್ನು ನಡೆಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸುವ ಮೂಲಕ ಮಕ್ಕಳಲ್ಲಿ ಕ್ರೀಡಾ ಮನೋಭಾವವನ್ನು ಮೂಡಿಸಲಾಯಿತು.






ಸಡಗರದ ದೀಪಾವಳಿ ಆಚರಣೆ

               ಬೆಳಕಿನ ಹಬ್ಬ ದೀಪಾವಳಿಯನ್ನು ನಮ್ಮ ಶಾಲೆಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ದೀಪಾವಳಿ ಆಚರಣೆಯ ಪೌರಾಣಿಕ ಹಿನ್ನಲೆಯನ್ನು ಮಕ್ಕಳಿಗೆ ತಿಳಿಸಿದರು. ದೀಪಾವಳಿ ಕುರಿತಾದ ಹಾಡನ್ನು ಮಕ್ಕಳು ಹಾಡಿದರು. ಮಕ್ಕಳನ್ನು ಕತ್ತಲ ಕೋಣೆಯಲ್ಲಿ ಕುಳ್ಳಿರಿಸಿ, ಬಳಿಕ ಹಣತೆಗಳನ್ನು ಬೆಳಗಿಸುವ ಮೂಲಕ  ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಸಂದೇಶವನ್ನು ಸಾರಲಾಯಿತು.




'ಸ್ವಚ್ಛ ಭಾರತ ನಿರ್ಮಾಣ' ಕಾರ್ಯಕ್ರಮದಲ್ಲಿ....

      'ಸ್ವಚ್ಛ ಭಾರತ ನಿರ್ಮಾಣ' ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಶಾಲಾ ಪರಿಸರ ಶುಚೀಕರಣ... 





Tuesday 21 October 2014

ಶಾಸ್ತ್ರ ಮೇಳದಲ್ಲಿ ಮಿಂಚಿದ ಪ್ರತಿಭೆಗಳು

               ತಾ. 16-10-14 ಮತ್ತು 17-10-14 ರಂದು ಸಂತ ಜೋಸೆಫರ ಶಾಲೆ ಕಳಿಯೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರ ಮೇಳದಲ್ಲಿ ನಮ್ಮ ಶಾಲಾ ಮಕ್ಕಳು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿಶ್ಮಿತ ಹಾಗೂ ನಂದಿನಿ (ಸಮಾಜ ವಿಜ್ಞಾನದ ಮೋಡೆಲ್- 'A' ಗ್ರೇಡ್), ಅಬ್ದುಲ್ ಖಾದರ್ ನಾದೀಮ್. ಎಚ್ (ಬುಕ್ ಬೈಂಡಿಂಗ್-'A' ಗ್ರೇಡ್), ಹಾಗೂ ಅಗರಬತ್ತಿ ಮಾಡುವುದರಲ್ಲಿ 'A' ಗ್ರೇಡ್ ಪಡೆದ ಪವನ್ ಕುಮಾರ್ ತಮ್ಮ ಪ್ರಶಸ್ತಿ ಪತ್ರದೊಂದಿಗೆ....


Thursday 9 October 2014

ವಿಶ್ವ ಅಂಚೆ ದಿನಾಚರಣೆ

            ತಾ. 09-10-2014 ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಅಂಚೆ ಚೀಟಿಗಳ ಪ್ರದರ್ಶನ ನಡೆಸಲಾಯಿತು. ಬಳಿಕ ಅಂಚೆಯಣ್ಣನ ಕೆಲಸವನ್ನು ಮಕ್ಕಳು ಅಣುಕು ಪ್ರದರ್ಶನದ ಮೂಲಕ ತೋರಿಸಿದರು. ಅದಕ್ಕಾಗಿ ಮಕ್ಕಳಲ್ಲಿ ತಮ್ಮ ಗೆಳೆಯರಿಗೆ ಪತ್ರವನ್ನು ಬರೆಯುವ ಚಟುವಟಿಕೆಯನ್ನು ಮಾಡಲಾಯಿತು. ಅಂಚೆಯಣ್ಣನ ಪಾತ್ರವನ್ನು ನಿರ್ವಹಿಸಿದ ಶಾಲಾ ವಿದ್ಯಾರ್ಥಿ ದೀರಜ್ ಆರ್ ಅಂಚೆಪೆಟ್ಟಿಗೆಯಲ್ಲಿ ಮಕ್ಕಳು ಹಾಕಿದ ಪತ್ರಗಳನ್ನು ವಿತರಿಸುವ ಮೂಲಕ ಎಲ್ಲರ ಗಮನ ಸೆಳೆದನು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಅಂಚೆ ವ್ಯವಸ್ಥೆಗಳ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು.








Thursday 2 October 2014

'ಸ್ವಚ್ಛ ಭಾರತ ನಿರ್ಮಾಣ'ದಲ್ಲಿ ಭಾಗಿಯಾದಾಗ....

                    ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿ ಪ್ರಯುಕ್ತ ನಮ್ಮ ಶಾಲೆಯಲ್ಲಿ ತಾ. 02-10-2014 ನೇ ಗುರುವಾರದಂದು ವಿಶೇಷ ಶಾಲಾ ಎಸೆಂಬ್ಲಿಯನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಹಾಗೂ ಶಾಲಾ ಅಧ್ಯಾಪಕ-ಅಧ್ಯಾಪಕಿಯರು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನವನ್ನು ಸಲ್ಲಿಸಿದರು. ಬಳಿಕ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಧ್ಯಾಪಕ-ಅಧ್ಯಾಪಕಿಯರ ಜೊತೆಗೂಡಿ ಶಾಲಾ ಪರಿಸರ ಹಾಗೂ ಸ್ಥಳೀಯ ಅಂಗನವಾಡಿಯ ಪರಿಸರವನ್ನು ಶುಚೀಕರಣ ಮಾಡಿದರು. ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳ ದಣಿವನ್ನು ನಿವಾರಿಸಲು ಅವಲಕ್ಕಿ ಮತ್ತು ಮಜ್ಜಿಗೆಯನ್ನು ನೀಡಲಾಯಿತು.











ದಸರಾ ನಾಡಹಬ್ಬ ಆಚರಣೆ....

                ನಮ್ಮ ಶಾಲೆಯಲ್ಲಿ ದಸರಾ ನಾಡಹಬ್ಬವನ್ನು ತಾ. 01-10-2014 ನೇ ಬುಧವಾರದಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕರ್ನಾಟಕದ ನಾಡಗೀತೆಯಾದ 'ಜೈ ಭಾರತ ಜನನಿಯ ತನುಜಾತೆ' ಗೀತೆಯನ್ನು  ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಕ್ಕಳು ವಿವಿಧ ಜನಪದ ಹಾಡುಗಳನ್ನು ಹಾಡಿ, ನೀತಿಕಥೆಯನ್ನು ಹೇಳಿ, ನೃತ್ಯಗಳನ್ನು ಮಾಡುವುದರ ಮೂಲಕ ಎಲ್ಲರ ಮನರಂಜಿಸಿದರು. ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.