....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Thursday 2 October 2014

'ಸ್ವಚ್ಛ ಭಾರತ ನಿರ್ಮಾಣ'ದಲ್ಲಿ ಭಾಗಿಯಾದಾಗ....

                    ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿ ಪ್ರಯುಕ್ತ ನಮ್ಮ ಶಾಲೆಯಲ್ಲಿ ತಾ. 02-10-2014 ನೇ ಗುರುವಾರದಂದು ವಿಶೇಷ ಶಾಲಾ ಎಸೆಂಬ್ಲಿಯನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಹಾಗೂ ಶಾಲಾ ಅಧ್ಯಾಪಕ-ಅಧ್ಯಾಪಕಿಯರು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನವನ್ನು ಸಲ್ಲಿಸಿದರು. ಬಳಿಕ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಧ್ಯಾಪಕ-ಅಧ್ಯಾಪಕಿಯರ ಜೊತೆಗೂಡಿ ಶಾಲಾ ಪರಿಸರ ಹಾಗೂ ಸ್ಥಳೀಯ ಅಂಗನವಾಡಿಯ ಪರಿಸರವನ್ನು ಶುಚೀಕರಣ ಮಾಡಿದರು. ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳ ದಣಿವನ್ನು ನಿವಾರಿಸಲು ಅವಲಕ್ಕಿ ಮತ್ತು ಮಜ್ಜಿಗೆಯನ್ನು ನೀಡಲಾಯಿತು.











No comments:

Post a Comment