ಜನ್ಮಶತಾಬ್ಧಿಯನ್ನು ಇತ್ತೀಚೆಗಷ್ಟೆ ಆಚರಿಸಿ ಶತಮಾನದ ಗಾನವನ್ನು ಹರಿಸಿ ಕನ್ನಡಾಭಿಮನವನ್ನು ಮೇರೆತ್ತರಕ್ಕೆ ಏರಿಸಿದ ಕನ್ನಡ ಸಾಹಿತ್ಯ ಲೋಕದ ಮಿನುಗು ನಕ್ಷತ್ರ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಯವರು ನಮ್ಮನ್ನೆಲ್ಲ ಅಗಲಿದ್ದಾರೆ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಿ ಶಾಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಮತ್ತು ಶಿಕ್ಷಕ ವೃಂದ ಹಾಗೂ ಶಾಲಾ ವಿದ್ಯಾರ್ಥಿ ನಾಯಕರಾದ ಕುಮಾರಿ ನಿಹಾ ಫಾತಿಮ ಹಾಗೂ ಕೀರ್ತನ್ ಪುಷ್ಪಾರ್ಚನೆಗೈದು ನಮನವನ್ನು ಸಲ್ಲಿಸಿದರು.
No comments:
Post a Comment