....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Wednesday 6 August 2014

'ಸಾಕ್ಷರ 2014' ಉದ್ಘಾಟನೆ


         ಡಯೆಟ್ ಕಾಸರಗೋಡ್ ಆಯೋಜಿಸಿದ 'ಸಾಕ್ಷರ 2014' ಎಂಬ ವಿನೂತನ ಕಾರ್ಯಕ್ರಮಕ್ಕೆ ನಮ್ಮ ಶಾಲೆಯಲ್ಲಿ ತಾ. 06-08-2014 ನೇ ಬುಧವಾರ ಕಾರ್ಯಕ್ರಮವನ್ನು ಉದ್ಘಾಟಿಸುವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಪಂಚಾಯತಿನ ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಪವನ್ ಕುಮಾರ್ ಅಂಜರೆ ಚಾರ್ಟಿಗೆ ಬಣ್ಣ ಕೊಟ್ಟು ಉದ್ಘಾಟನಾ ಘೋಷಣೆಯನ್ನು ಅನಾವರಣಗೊಳಿಸುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಪ್ರಬಂದಕ ಶ್ರೀ ವಿಶ್ವನಾಥ ಪಿ ಉದ್ಯಾವರ್ ವಹಿಸಿದ್ದರು. ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು 'ಸಾಕ್ಷರ 2014' ರ ಉದ್ದೇಶವನ್ನು ರಕ್ಷಕರಿಗೆ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಎ ಯವರು ಸ್ವಾಗತಿಸಿ,  ಶಾಲಾ ಅಧ್ಯಾಪಿಕೆಯಾದ  ಭವ್ಯಶ್ರೀ ಯನ್ ವಂದಿಸಿದರು.








No comments:

Post a Comment