ತಾ.
21-07-2014 ನೇ ಸೋಮವಾರದಂದು
ಚಾಂದ್ರ ದಿನಾಚರಣೆಯನ್ನು
ಆಚರಿಸಲಾಯಿತು. ಆ ಪ್ರಯುಕ್ತ
ಚಾಂದ್ರ ಯಾನದ ಸಿ.ಡಿ
ಹಾಗು ಚಿತ್ರ ಪ್ರದರ್ಶನವನ್ನು
ನಡೆಸಲಾಯಿತು. ಬಳಿಕ
ಮಕ್ಕಳಿಗೆ ರಸಪ್ರಶ್ನೆಯನ್ನು
ಶಾಲಾ ಅಧ್ಯಾಪಿಕೆಯಾದ ಶ್ರೀಮತಿ
ಗೀತಾ ಎ ನಡೆಸಿಕೊಟ್ಟರು.
ಸ್ಪರ್ಧೆಯಲ್ಲಿ
ವಿಜೇತರಾದ ದೀರಜ್ ಆರ್ ಹಾಗೂ
ಆಯಿಶತ್ ಸಫ್ನರಿಗೆ ಬಹುಮಾನವನ್ನು
ವಿತರಿಸಲಾಯಿತು. ಬಳಿಕ
ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ
ಯವರು ಚಾಂದ್ರ ದಿನದ ಮಹತ್ವ ಹಾಗೂ
ವಿಶೇಷತೆಯನ್ನು ತಿಳಿಸಿ, ನಂತರ
ಮಕ್ಕಳ ಕಣ್ಣು ಮುಚ್ಚಿಸಿ ಅವರ
ಮನಸನ್ನು ಚಂದ್ರ ಲೋಕಕ್ಕೆ
ಕೊಂಡೊಯ್ಯುವ ವಿಶೇಷ ಚಟುವಟಿಕೆಯನ್ನು
ನಡೆಸಿಕೊಟ್ಟರು. ಇದೇ
ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ
ಅಬ್ದುಲ್ ಖಾದರ್ ನಾದಿಮ್ ಗಗನ
ಯಾತ್ರಿಯ ವೇಷ ಧರಿಸಿ ವೇದಿಕೆಗೆ
ಬಂದು ಚಾಂದ್ರ ಯಾನವನ್ನು
ಅನುಕರಿಸಿದ್ದು ಎಲ್ಲರ ಗಮನ
ಸೆಳೆಯಿತು.
No comments:
Post a Comment