....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Saturday 5 September 2015

ಶಿಕ್ಷಕರ ದಿನಾಚರಣೆಯ ಶುಭಾಶಯಗಳು...

              ಒಂದೊಳ್ಳೆ ಗುರಿಯನ್ನು ತಲುಪಲು ಒಬ್ಬ ಗುರುವಿನ ಮಾರ್ಗದರ್ಶನ ಅತಿ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಅಧ್ಯಾಪಕ ಪ್ರಮುಖ ಪಾತ್ರ ವಹಿಸುತ್ತಾನೆ. ಜಗತ್ತಲ್ಲಿ ಕೆಟ್ಟ ತಂದೆ-ತಾಯಿ ಇರಲಾರರು ಎಂಬುದು ಎಷ್ಟು ಸತ್ಯವೋ ಕೆಟ್ಟ ಅಧ್ಯಾಪರೂ ಇರಲಾರರು ಎಂಬುದು ಅಷ್ಟೆ ಸತ್ಯ. ಇದ್ದರೂ ಅವರು ಆ ಸ್ಥಾನಕ್ಕೆ ಅರ್ಹರಲ್ಲ.
ಭಾರತ ಕಂಡ ನೆಚ್ಚಿನ ಅಧ್ಯಾಪಕರಲ್ಲಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಪ್ರಮುಖರೆನಿಸುತ್ತಾರೆ. 1888 ಸಪ್ಟಂಬರ್ 5 ರಂದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸರ್ವಪಳ್ಳಿ ವೀರಸ್ವಾಮಿ ಹಾಗೂ ಸೀತಮ್ಮ ದಂಪತಿಗೆ ಹುಟ್ಟಿದ ಸರ್ಪಳ್ಳಿ ರಾಧಾಕೃಷ್ಣನ್ ತನ್ನ ನೆಚ್ಟಿನ ಅಧ್ಯಾಪನ ವೃತ್ತಿಯನ್ನೆ ಆಯ್ಕೆ ಮಾಡಿಕೊಂಡರು. ಅದರಲ್ಲೆ ಹಂತ-ಹಂತವಾಗಿ ಮೇಲೇರಿದ ರಾಧಾಕೃಷ್ಣನ್ 1952 ರಲ್ಲಿ ದೇಶದ ಮೊದಲ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಇದೇ ಸಮಯದಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯು ಲಭಿಸಿತು. ಡಾ. ರಾಜೇಂದ್ರ ಪ್ರಸಾದ್ ನಂತರ 1962ರಲ್ಲಿ ಭಾರತದ ಮೊದಲ ಪ್ರಜೆಯಾಗಿ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದರು.
ತನ್ನ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕೆಂಬ ಇಂಗಿತವನ್ನು ಹೊಂದಿದ್ದ ಎಸ್. ರಾಧಾಕೃಷ್ಣನ್ ಅವರ ಮಹದಾಸೆಯಂತೆ ಸೆಪ್ಟಂಬರ್ 5 ನ್ನು 'ಶಿಕ್ಷಕರ ದಿನ'ವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.
ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವುದರೊಂದಿಗೆ ದೇಶಕ್ಕೆ ಸಮರ್ಥ ಪ್ರಜೆಗಳನ್ನು ನೀಡುವ ಜವಾಬ್ದಾರಿಯನ್ನು ಹೂತ್ತಿರುವ ಗೌರವಯುತ ಅಧ್ಯಾಪಕ ಬಂಧುಗಳಿಗೆ 'ಶಿಕ್ಷಕ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು....

No comments:

Post a Comment