ಇಂದು ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರುಗಳ ಸಮಾಧಿ.
ಶಿಷ್ಯ: ಆಡು ದನಗಳ ಹಾಲು ಕುಡಿಯುತ್ತೇವೆ. ಅವುಗಳ ಮಾಂಸ ತಿಂದರೆ ತಪ್ಪೇನು? ಅದು ಅಪಾಯಕಾರಿಯೇ?
ನಾರಾಯಣ ಗುರು: ಎಂಥ ಅಪಾಯ? ನಿಮ್ಮ ತಾಯಿ ಬದುಕಿದ್ದಾಳೆಯೇ?
ಶಿಷ್ಯ: ಇಲ್ಲ
ನಾರಾಯಣ ಗುರು: ಅವಳನ್ನು ಸಮಾಧಿ ಮಾಡಿದೆಯೋ? ಕತ್ತರಿಸಿ ತಿಂದುಬಿಟ್ಟೆಯೋ?
ನಾರಾಯಣ ಗುರು: ಎಂಥ ಅಪಾಯ? ನಿಮ್ಮ ತಾಯಿ ಬದುಕಿದ್ದಾಳೆಯೇ?
ಶಿಷ್ಯ: ಇಲ್ಲ
ನಾರಾಯಣ ಗುರು: ಅವಳನ್ನು ಸಮಾಧಿ ಮಾಡಿದೆಯೋ? ಕತ್ತರಿಸಿ ತಿಂದುಬಿಟ್ಟೆಯೋ?
ಮೇಲ್ಕಂಡ ಈ ಪ್ರಸಂಗ ಶ್ರೀ ನಾರಾಯಣ ಗುರುಗಳ ನಡೆ-ನುಡಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಬಸವಣ್ಣನಂತೆ ಜಾತಿ ವ್ಯವಸ್ಥೆ ವಿರುದ್ಧ ಆಂದೋಲನಗಳನ್ನು ನಡೆಸಿದ ನಾರಾಯಣ ಗುರು, ಶೋಷಿತರ ಉದ್ಧಾರಕ. ಇವರ ಅಂದಿನ ಕೆಲಸಗಳತ್ತ ಕಣ್ಣಾಯಿಸಿದರೆ, 'ನಾರಾಯಣ ಗುರುದೇವನಿಗಿಂತ ಶ್ರೇಷ್ಠನಾದ ಮತ್ತೊಬ್ಬ ಗುರುವನ್ನು, ಕೆಚ್ಚೆದೆಯ ಮತ್ತೊಬ್ಬ ಸುಧಾರಕನನ್ನು, ಪವಿತ್ರನಾದ ಸಂತನನ್ನು, ಮೇಲಾಗಿ ಅವರನ್ನು ಮೀರಿಸುವ ರಾಷ್ಟ್ರ ನಿರ್ಮಾಪಕನನ್ನು ಇಂಡಿಯಾ ಕಂಡಿಲ್ಲ' ಎನ್ನುವ ಸ್ವಾಮಿ ಧರ್ಮತೀರ್ಥರ ಮಾತಿನಲ್ಲಿ ಅತಿಶಯವೇನಿಲ್ಲ ಅನ್ನಿಸುತ್ತದೆ.
ಕೇರಳದ ತಿರುವನಂತಪುರ ಬಳಿಯ ಚೆಂಪಜಂತಿಯಲ್ಲಿ ಸಾಮಾನ್ಯ ಮಧ್ಯಮ ವರ್ಗದ ಈಳವರ ಕುಟುಂಬದಲ್ಲಿ ಜನಿಸಿದ ಈ ನಾರಾಯಣ, ನಂತರದ ದಿನಗಳಲ್ಲಿ ಗುರುವಾಗಿ ಬದಲಾದರು. ಅವರು ಮದನ್ ಆಸನ್ ಮತ್ತು ಕೊಚ್ಚು ಪೆಣ್ಣು ದಂಪತಿಯ ಏಕೈಕ ಪುತ್ರ ಸಂತಾನ(ಜನನ 1856ರ ಆ.22). ಆಸನ್ ಎಂದರೆ ಆಚಾರ್ಯ ಎಂದರ್ಥ. ಹೀಗಾಗಿ ನಾರಾಯಣ ಗುರುಗಳ ತಂದೆ ಮದನ್ ಆಸನ್, ಉಪಾಧ್ಯಾಯ ಕೆಲಸ ಮಾಡಿರಬಹುದು. ತಮ್ಮ ಮಗನಿಗೆ ಇಟ್ಟ ಹೆಸರು ನಾರಾಯಣ. ಹೆತ್ತವರು ಪ್ರೀತಿಯಿಂದ ನನೂ ಎಂದೂ ಕರೆಯುತ್ತಿದ್ದರು.
ಬಾಲ್ಯದಲ್ಲಿಯೇ ನಾರಾಯಣ, ತಮ್ಮ ವಿಚಾರಗಳಿಂದ ಎಲ್ಲರ ಗಮನ ಸೆಳೆದರು. ನೈವೇದ್ಯಕ್ಕೆ ಇಟ್ಟಿದ್ದ ತಿಂಡಿತಿನಿಸು ಅಥವಾ ಹಣ್ಣುಗಳನ್ನು ಅವರು ತಿಂದು ಬಿಡುತ್ತಿದ್ದರು. ಈ ಕೃತ್ಯವನ್ನು ಪ್ರಶ್ನಿಸಿದರೆ, ''ದೇವರು ತಾನೇ ಸಷ್ಟಿಸಿದ ವಸ್ತುಗಳನ್ನು ತಾನೇ ತಿಂದರೆ ಜೀವಿಗಳ ಗತಿಯೇನು? ಅವನು ಮನುಷ್ಯರ ಮುಖಾಂತರವೇ ತಿನ್ನಬೇಕು. ಮಕ್ಕಳು ತಿಂದರಂತೂ ಅವನಿಗೆ ಹೆಚ್ಚಿನ ತಪ್ತಿ,'' ಎನ್ನುವ ಮೂಲಕ ನಾರಾಯಣ, ಹೆತ್ತವರ ಬಾಯಿ ಮುಚ್ಚಿಸುತ್ತಿದ್ದ.
ಒಂದು ಸಲ ಕೆಳ ಜಾತಿಯವರು ಒಲೆಯ ಮೇಲೆ ಗಂಜಿ ಇಟ್ಟು ಬೇರೆ ಇನ್ನೇನೋ ಕೆಲಸದಲ್ಲಿ ತೊಡಗಿದ್ದರು. ಅದೇ ಮಾರ್ಗದಲ್ಲಿ ಬಂದ ನಾರಾಯಣ, ಕಾದು ಉಕ್ಕುತ್ತಿದ್ದ ಗಂಜಿಯನ್ನು ಕೆಳಕ್ಕೆ ಇಳಿಸಿದ್ದ. ಈ ಬಗ್ಗೆ ತಂದೆ ಆಕ್ಷೇಪಿಸಿದಾಗ, 'ನಾನು ಗಂಜಿಯನ್ನು ಕೆಳಗೆ ಇಳಿಸದಿದ್ದರೆ, ಆ ಕುಟುಂಬ ಹಸಿವಿನಿಂದ ಇಂದು ಸಾಯಬೇಕಿತ್ತು' ಎಂದಿದ್ದ. ನಾರಾಯಣ ಗುರುಗಳ ಬಗ್ಗೆ ದೇಜಗೌ ಬರೆದಿರುವ ಪುಸ್ತಕದಲ್ಲಿ ಇಂಥ ಅನೇಕ ಘಟನೆಗಳು ದಾಖಲಾಗಿವೆ.
ಶೂದ್ರರ ಶಿಕ್ಷಣಕ್ಕೆ ದೇಶದೆಲ್ಲೆಡೆ ವಿರೋಧವಿದ್ದ ಕಾಲವದು. ಆದರೆ ಕೇರಳದಲ್ಲಿ ವಾತಾವರಣ ಅಷ್ಟು ಹದಗೆಟ್ಟಿರಲಿಲ್ಲ. ಹೀಗಾಗಿ ನಾರಾಯಣ ಗುರು ವ್ಯಾಸಂಗಕ್ಕೆ ಅಷ್ಟಾಗಿ ತೊಡಕಾಗಲಿಲ್ಲ. ವಂಶಪಾರಂಪರ್ಯವಾಗಿ ಬಂದಿದ್ದ ವೈದ್ಯ ವೃತ್ತಿಯನ್ನೂ ಅವರು ಮರೆತಿರಲಿಲ್ಲ. ವಿದ್ಯಾರ್ಥಿ ದಿನಗಳಲ್ಲಿಯೇ ಅವರು ಬಡವರ ಗುಡಿಸಲುಗಳಿಗೆ ಹೋಗಿ, ಔಷಧ ಕೊಟ್ಟು ಬರುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಧೈರ್ಯ ತುಂಬುತ್ತಿದ್ದರು. ಬದುಕಿನ ಕೊನೆ ಉಸಿರಿರುವ ತನಕ, ಆರೋಗ್ಯಕರ ಸಮಾಜಕ್ಕಾಗಿ ಇವರ ಮನಸ್ಸು ಮಿಡಿಯುತ್ತಿತ್ತು.
ಕೇರಳದ ತಿರುವನಂತಪುರ ಬಳಿಯ ಚೆಂಪಜಂತಿಯಲ್ಲಿ ಸಾಮಾನ್ಯ ಮಧ್ಯಮ ವರ್ಗದ ಈಳವರ ಕುಟುಂಬದಲ್ಲಿ ಜನಿಸಿದ ಈ ನಾರಾಯಣ, ನಂತರದ ದಿನಗಳಲ್ಲಿ ಗುರುವಾಗಿ ಬದಲಾದರು. ಅವರು ಮದನ್ ಆಸನ್ ಮತ್ತು ಕೊಚ್ಚು ಪೆಣ್ಣು ದಂಪತಿಯ ಏಕೈಕ ಪುತ್ರ ಸಂತಾನ(ಜನನ 1856ರ ಆ.22). ಆಸನ್ ಎಂದರೆ ಆಚಾರ್ಯ ಎಂದರ್ಥ. ಹೀಗಾಗಿ ನಾರಾಯಣ ಗುರುಗಳ ತಂದೆ ಮದನ್ ಆಸನ್, ಉಪಾಧ್ಯಾಯ ಕೆಲಸ ಮಾಡಿರಬಹುದು. ತಮ್ಮ ಮಗನಿಗೆ ಇಟ್ಟ ಹೆಸರು ನಾರಾಯಣ. ಹೆತ್ತವರು ಪ್ರೀತಿಯಿಂದ ನನೂ ಎಂದೂ ಕರೆಯುತ್ತಿದ್ದರು.
ಬಾಲ್ಯದಲ್ಲಿಯೇ ನಾರಾಯಣ, ತಮ್ಮ ವಿಚಾರಗಳಿಂದ ಎಲ್ಲರ ಗಮನ ಸೆಳೆದರು. ನೈವೇದ್ಯಕ್ಕೆ ಇಟ್ಟಿದ್ದ ತಿಂಡಿತಿನಿಸು ಅಥವಾ ಹಣ್ಣುಗಳನ್ನು ಅವರು ತಿಂದು ಬಿಡುತ್ತಿದ್ದರು. ಈ ಕೃತ್ಯವನ್ನು ಪ್ರಶ್ನಿಸಿದರೆ, ''ದೇವರು ತಾನೇ ಸಷ್ಟಿಸಿದ ವಸ್ತುಗಳನ್ನು ತಾನೇ ತಿಂದರೆ ಜೀವಿಗಳ ಗತಿಯೇನು? ಅವನು ಮನುಷ್ಯರ ಮುಖಾಂತರವೇ ತಿನ್ನಬೇಕು. ಮಕ್ಕಳು ತಿಂದರಂತೂ ಅವನಿಗೆ ಹೆಚ್ಚಿನ ತಪ್ತಿ,'' ಎನ್ನುವ ಮೂಲಕ ನಾರಾಯಣ, ಹೆತ್ತವರ ಬಾಯಿ ಮುಚ್ಚಿಸುತ್ತಿದ್ದ.
ಒಂದು ಸಲ ಕೆಳ ಜಾತಿಯವರು ಒಲೆಯ ಮೇಲೆ ಗಂಜಿ ಇಟ್ಟು ಬೇರೆ ಇನ್ನೇನೋ ಕೆಲಸದಲ್ಲಿ ತೊಡಗಿದ್ದರು. ಅದೇ ಮಾರ್ಗದಲ್ಲಿ ಬಂದ ನಾರಾಯಣ, ಕಾದು ಉಕ್ಕುತ್ತಿದ್ದ ಗಂಜಿಯನ್ನು ಕೆಳಕ್ಕೆ ಇಳಿಸಿದ್ದ. ಈ ಬಗ್ಗೆ ತಂದೆ ಆಕ್ಷೇಪಿಸಿದಾಗ, 'ನಾನು ಗಂಜಿಯನ್ನು ಕೆಳಗೆ ಇಳಿಸದಿದ್ದರೆ, ಆ ಕುಟುಂಬ ಹಸಿವಿನಿಂದ ಇಂದು ಸಾಯಬೇಕಿತ್ತು' ಎಂದಿದ್ದ. ನಾರಾಯಣ ಗುರುಗಳ ಬಗ್ಗೆ ದೇಜಗೌ ಬರೆದಿರುವ ಪುಸ್ತಕದಲ್ಲಿ ಇಂಥ ಅನೇಕ ಘಟನೆಗಳು ದಾಖಲಾಗಿವೆ.
ಶೂದ್ರರ ಶಿಕ್ಷಣಕ್ಕೆ ದೇಶದೆಲ್ಲೆಡೆ ವಿರೋಧವಿದ್ದ ಕಾಲವದು. ಆದರೆ ಕೇರಳದಲ್ಲಿ ವಾತಾವರಣ ಅಷ್ಟು ಹದಗೆಟ್ಟಿರಲಿಲ್ಲ. ಹೀಗಾಗಿ ನಾರಾಯಣ ಗುರು ವ್ಯಾಸಂಗಕ್ಕೆ ಅಷ್ಟಾಗಿ ತೊಡಕಾಗಲಿಲ್ಲ. ವಂಶಪಾರಂಪರ್ಯವಾಗಿ ಬಂದಿದ್ದ ವೈದ್ಯ ವೃತ್ತಿಯನ್ನೂ ಅವರು ಮರೆತಿರಲಿಲ್ಲ. ವಿದ್ಯಾರ್ಥಿ ದಿನಗಳಲ್ಲಿಯೇ ಅವರು ಬಡವರ ಗುಡಿಸಲುಗಳಿಗೆ ಹೋಗಿ, ಔಷಧ ಕೊಟ್ಟು ಬರುತ್ತಿದ್ದರು. ಕಷ್ಟದಲ್ಲಿದ್ದವರಿಗೆ ಧೈರ್ಯ ತುಂಬುತ್ತಿದ್ದರು. ಬದುಕಿನ ಕೊನೆ ಉಸಿರಿರುವ ತನಕ, ಆರೋಗ್ಯಕರ ಸಮಾಜಕ್ಕಾಗಿ ಇವರ ಮನಸ್ಸು ಮಿಡಿಯುತ್ತಿತ್ತು.
No comments:
Post a Comment