ಸ್ವಾಮೀ ವಿವೇಕಾನಂದರ 153 ನೇ ಜನ್ಮ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ನಡೆಸಲಾಯಿತು. ಇದೇ ಸಂದರ್ಭದಲ್ಲಿ ವಿವೇಕ ಜಾಗೃತ ಬಳಗದ ಸದಸ್ಯರಾದ ಶ್ರೀ ಕಾರ್ತಿಕ್ ಹಾಗೂ ಶ್ರೀ ಲೋಹಿತ್ ರವರು ಸ್ವಾಮೀ ವಿವೇಕಾನಂದರ ಜೀವನ ಸಾಧನೆ ಹಾಗೂ ಅವರು ತೋರಿಸಿದ ಸನ್ಮಾರ್ಗಗಳ ಕುರಿತು ತರಗತಿ ನಡೆಸಿದರು. ಮಕ್ಕಳಿಗೆ ಆಟವನ್ನೂ ಆಡಿಸಿ ಮನರಂಜಿಸಿದರು. ಎಲ್ಲರಿಗೂ ಸಿಹಿತಿಂಡಿಯನ್ನೂ ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಉಪಸ್ಥಿತರಿದ್ದರು. ಅಧ್ಯಾಪಕ ಜಯಪ್ರಶಾಂತ್ ಪಿ ಕಾರ್ಯಕ್ರಮ ನಡೆಸಿಕೊಟ್ಟರು.
No comments:
Post a Comment