ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮ ಇಂದು ಜರಗಿತು.
ಕಾರ್ಯಕ್ರಮದ
ಉದ್ಘಾಟನೆಯನ್ನು ಮಂಜೇಶ್ವರ
ಪಂಚಾಯತಿನ ಸದಸ್ಯ ಶ್ರೀ ಪವನ್
ಕುಮಾರ್ ಅಂಜರೆ ನೆರವೇರಿಸಿದರು.
ಅಧ್ಯಕ್ಷತೆಯನ್ನು
ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್
ಪಿ ಉದ್ಯಾವರ್ ವಹಿಸಿದ್ದರು.
ಶ್ರೀ ವಿಶಾಲ್ ಕೆ
ಬೆಂಗರೆಯವರು ಶಾಲೆಯ ಎಲ್ಲಾ
ಮಕ್ಕಳಿಗೆ ನೀಡಿದ ಉಚಿತ ಪುಸ್ತಕ
ಹಾಗೂ ಕಲಿಕೋಪಕರಣಗಳನ್ನು ಶ್ರೀ
ಕೃಷ್ಣಪ್ಪ ಬೆಂಗರೆ ಹಾಗೂ ಶ್ರೀಮತಿ
ಶಾಲಿನಿ ಕೆ ಬೆಂಗರೆ ದಂಪತಿ ನೀಡಿದರು.
ಕಾರ್ಯಕ್ರಮದಲ್ಲಿ
ಶ್ರೀ ಶ್ರೀನಿವಾಸ್ ಭಟ್ ಕಣ್ವತೀರ್ಥ, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಯೋಗ ಸಾಧಕಿ ಶ್ರೀಮತಿ ಗಿರಿಜಾ ಯನ್ ಉದ್ಯಾವರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2014-15 ನೇ ಸಾಲಿನ ಒಂದನೇ ತರಗತಿ ಮಕ್ಕಳಿಗೆ ಸರಕಾರದಿಂದ ದೊರಕಿದ ಸಮವಸ್ತ್ರವನ್ನು ವಾರ್ಡ್ ಸದಸ್ಯ ಶ್ರೀ ಪವನ್ ಕುಮಾರ್ ಅಂಜರೆ ವಿತರಿಸಿದರು. ಶಾಲೆಯ ಉಳಿದ ಮಕ್ಕಳಿಗೆ ಸಮವಸ್ತ್ರವನ್ನು ಶಾಲಾ ಆಡಳಿತ ಸಮಿತಿ ನೀಡುವುದೆಂದು ಭರವಸೆ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ, ಅಧ್ಯಾಪಿಕೆ ಶ್ರೀಮತಿ ಗೀತಾ ಎ ವಂದಿಸಿದರು. ಅಧ್ಯಾಪಕ ಜಯಪ್ರಶಾಂತ್ ಪಿ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment