ನಮ್ಮ
ಶಾಲೆಯಲ್ಲಿ 2014-15ನೇ
ಸಾಲಿನ ರಕ್ಷಕ-ಶಿಕ್ಷಕ
ಸಂಘದ ಮಹಾಸಭೆಯು ತಾ. 13-06-2014 ನೇ
ಶುಕ್ರವಾರದಂದು ನಡೆಯಿತು. ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಜಲಜಾಕ್ಷಿ ಎ ಯವರು ಕಳೆದ ಶೈಕ್ಷಣಿಕ
ವರ್ಷದ ವಾರ್ಷಿಕ ವರದಿಯನ್ನು
ವಾಚಿಸಿದರು. ಕಾರ್ಯಕ್ರಮದಲ್ಲಿ
ಮಂಜೇಶ್ವರ ಪಂಚಾಯತ್ ಕ್ಷೇಮಾಭಿವೃದ್ಧಿ
ಸ್ಥಾಯೀ ಸಮಿತಿಯ ಅಧ್ಯಕ್ಷರಾದ
ಶ್ರೀ ಪವನ್ ಕುಮಾರ್ ಅಂಜರೆ,
ಶಾಲಾ ಪ್ರಬಂದಕ ಶ್ರೀ
ವಿಶ್ವನಾಥ ಪಿ ಉದ್ಯಾವರ್,
ಉದ್ಯಾವರ ಬೋವಿ
ವಿದ್ಯಾದಾಯಿನಿ ಸಂಘ, ಉದ್ಯಾವರ
ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ
ಬೆಂಗರೆ, ಪಿ.ಟಿ.ಎ
ಅಧ್ಯಕ್ಷ ಶ್ರೀ ಚಂದ್ರಶೇಖರ್
ಉಪಸ್ಥಿತರಿದ್ದರು. 2014-15ನೇ
ಸಾಲಿನ ರಕ್ಷಕ-ಶಿಕ್ಷಕ
ಸಂಘದ ನೂತನ ಅಧ್ಯಕ್ಷರಾಗಿ ಶ್ರೀ
ಚಂದ್ರಶೇಖರ್ ದೊಡ್ಡಹಿತ್ಲು,
ಉಪಾಧ್ಯಕ್ಷೆಯಾಗಿ
ಕಮರುನ್ನೀಸ ತೂಮಿನಾಡು ಅವರನ್ನು
ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಬಳಿಕ
ನಡೆದ ಮಾತೃ ಮಂಡಳಿಯ ಸಭೆಯಲ್ಲಿ
ಅಧ್ಯಕ್ಷೆಯಾಗಿ ಹೇಮಾವತಿ ಕಣ್ವತೀರ್ಥ,
ಉಪಾಧ್ಯಕ್ಷೆಯಾಗಿ
ತಾಹಿರ ಅವರನ್ನು ಅವಿರೋಧವಾಗಿ
ಆಯ್ಕೆ ಮಾಡಲಾಯಿತು. ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಜಲಜಾಕ್ಷಿ ಎ ಯವರು ಸ್ವಾಗತಿಸಿ,
ಶಾಲಾ ಅಧ್ಯಾಪಿಕೆಯಾದ
ಶ್ರೀಮತಿ ಗೀತಾ ಎ ವಂದಿಸಿದರು.
ಅಧ್ಯಾಪಕ ಶ್ರೀ
ಜಯಪ್ರಶಾಂತ್ ಪಿ ಯವರು ಕಾರ್ಯಕ್ರಮ
ನಡೆಸಿಕೊಟ್ಟರು.
No comments:
Post a Comment