ನಮ್ಮ
ಶಾಲೆಯಲ್ಲಿ ವಿಶ್ವ ಪರಿಸರ
ದಿನಾಚರಣೆಯನ್ನು ತಾ. 05-06-2014 ನೇ
ಗುರುವಾರದಂದು ಆಚರಿಸಲಾಯಿತು. ಪರಿಸರ
ದಿನಾಚರಣೆಯ ಅಂಗವಾಗಿ ಶಾಲಾ
ಮಕ್ಕಳಿಂದ ಪರಿಸರ ಸ್ನೇಹೀ ಮೆರವಣಿಗೆ
ನಡೆಯಿತು. ಶಾಲಾ
ವಠಾರದಿಂದ ಕಣ್ವತೀರ್ಥ ಮಠದವರೆಗೆ
ಮಕ್ಕಳು ಘೋಷಣೆಗಳನ್ನು ಕೂಗುತ್ತಾ
ಮೆರವಣಿಗೆ ನಡೆಸಿದರು. ಅಧ್ಯಾಪಕ
ಶ್ರೀ ಜಯಪ್ರಶಾಂತ್ ಪಿ,
ಅಧ್ಯಾಪಿಕೆಯರಾದ
ಭವ್ಯಶ್ರೀ ಯನ್, ಶ್ರೀಮತಿ
ಗೀತಾ ಎ ನೇತೃತ್ವ ವಹಿಸಿದರು.
ಬಳಿಕ ಶಾಲಾ ಶುಚೀಕರಣ
ನಡೆಯಿತು. ಮಕ್ಕಳಲ್ಲಿ
ಪರಿಸರ ರಕ್ಷಣೆಯ ಬಗ್ಗೆ ಪ್ರತಿಜ್ಞೆಯನ್ನು
ಮಾಡಿಸಲಾಯಿತು. ಇದೇ
ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಜಲಜಾಕ್ಷಿ ಎ ಶಾಲಾ
ಮಕ್ಕಳಿಗೆ ಸಸಿ ವಿತರಿಸಿದರು.
ಬಳಿಕ ಶಾಲಾ ಪರಿಸರದಲ್ಲಿ
ಸಸಿಗಳನ್ನು ನೆಡಲಾಯಿತು.
No comments:
Post a Comment