ತಾ.
17-07-2014 ನೇ ಗುರುವಾರದಂದು
ಶಾಲಾ ನಾಯಕನ ಆಯ್ಕೆಯನ್ನು ಚುನಾವಣೆಯ
ಮೂಲಕ ಮಾಡಲಾಯಿತು. ಚುನಾವಣೆಯ
ಹಿಂದಿನ ದಿನ ಮುಖ್ಯ ಚುನಾವಣಾಧಿಕಾರಿಯಾಗಿ
ಕರ್ತವ್ಯ ನಿರ್ವಹಿಸಿದ ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಜಲಜಾಕ್ಷಿ ಎ ಯವರು ಅಭ್ಯರ್ಥಿಗಳ
ನಾಮ ಪತ್ರವನ್ನು ಸ್ವೀಕರಿಸಿದರು. ಮರುದಿನ
ನಡೆದ ಚುನಾವಣೆಯಲ್ಲಿ ಸರದಿ
ಸಾಲಿನಲ್ಲಿ ನಿಂತ ಶಾಲಾ ವಿದ್ಯಾರ್ಥಿಗಳು
ಚುನಾವಣಾ ಗುರುತನ್ನು ತಮ್ಮ
ಬೆರಳಿಗೆ ಹಾಕಿಸಿಕೊಂಡು ಗೌಪ್ಯ
ಮತದಾನದ ಮೂಲಕ ತಮ್ಮ ನೆಚ್ಚಿನ
ಅಭ್ಯರ್ಥಿಗೆ ಮತವನ್ನು ಹಾಕಿದರು.
ಚುನಾವಣೆಯ ಎಲ್ಲಾ
ಕಾರ್ಯಗಳನ್ನು ಮಕ್ಕಳೇ ಮಾಡಿದ್ದು
ವಿಶೇಷವಾಗಿತ್ತು. ಈ
ಕಾರ್ಯದಲ್ಲಿ ಆಯಿಶತ್ ಸಫ್ನ,
ನಾಝ್ಮೀನ ಹಾಗೂ ಅಬ್ದುಲ್
ಖಾದರ್ ನಾದಿಮ್ ಮೊದಲದವರು
ಸಹಕರಿಸಿದರು. ನಂತರ
ಮುಖ್ಯ ಚುನಾವಣಾಧಿಕಾರಿಯ
ನೇತೃತ್ವದಲ್ಲಿ ಮತ ಎಣಿಕೆಯ
ಪ್ರಕ್ರಿಯೆಯು ನಡೆಯಿತು. ಶಾಲಾ
ವಿದ್ಯಾರ್ಥಿನಿ ವಿಶ್ಮಿತ ಸುಮಾರು
15 ಮತಗಳ ಅಂತರದಿಂದ
ಜಯಗಳಿಸಿದಳು. ಫಲಿತಾಂಶ
ಪ್ರಕಟಗೊಳ್ಳುತ್ತಲೇ ವಿಜೇತ
ಅಭ್ಯರ್ಥಿಯ ಬೆಂಬಲಿಗರ ಹರ್ಷೋದ್ಘಾರ
ಮುಗಿಲು ಮುಟ್ಟಿತ್ತು. ವಿಜಯ
ಯಾತ್ರೆಯನ್ನೂ ಕೈಗೊಂಡರು. ಬಳಿಕ
ನೂತನ ಮಂತ್ರಿ ಮಂಡಲ ರಚನೆಯನ್ನು
ಪ್ರತಿಜ್ಞಾ ಸ್ವೀಕಾರದ ಮೂಲಕ
ರಚಿಸಲಾಯಿತು. ಉಪನಾಯಕ
ಹಾಗೂ ಕಲಾ ಮಂತ್ರಿಯಾಗಿ ದೀರಜ್
ಆರ್, ಆರೋಗ್ಯ
ಮಂತ್ರಿಯಾಗಿ ಪವನ್ ಕುಮಾರ್ ಹಾಗೂ
ಕ್ರೀಡಾ ಮಂತ್ರಿಯಾಗಿ ನಂದಿನಿ
ಆಯ್ಕೆಗೊಂಡರು.
ನಾಮ ಪತ್ರ ಸಲ್ಲಿಕೆ
ಚುನಾವಣಾ ಪ್ರಕ್ರಿಯೆ ಆರಂಭ
ಸರದಿ ಸಾಲಿನಲ್ಲಿ ನಿಂತಿರುವ ಮತದಾರರು
ಚುನಾವಣಾ ಗುರುತನ್ನು ಹಾಕುತ್ತಿರುವುದು
ಗೌಪ್ಯ ಮತದಾನ
ಮತ ಎಣಿಕೆ ಪ್ರಕ್ರಿಯೆ
ವಿಜಯಿ ಅಭ್ಯರ್ಥಿಗೆ ಅಭಿನಂದನೆ
ಬೆಂಬಲಿಗರೊಂದಿಗೆ ವಿಜಯಿ ಯಾತ್ರೆ...
No comments:
Post a Comment