ಕೇರಳ
ಗ್ರಾಮೀಣ ಬ್ಯಾಂಕ್ ವತಿಯಿಂದ
ನಮ್ಮ ಶಾಲಾ ಬಡ ಮಕ್ಕಳಿಗೆ ಕೊಡೆ
ವಿತರಣಾ ಕಾರ್ಯಕ್ರಮವು ತಾ.
23-06-2014 ನೇ ಸೋಮವಾರದಂದು
ನಡೆಯಿತು. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಶಾಲಾ ಪ್ರಬಂದಕ
ಶ್ರೀ ವಿಶ್ವನಾಥ ಪಿ ಉದ್ಯಾವರ್
ವಹಿಸಿದ್ದರು. ಮುಖ್ಯ
ಅತಿಥಿಗಳಾಗಿ ಕೇರಳ ಗ್ರಾಮೀಣ
ಬ್ಯಾಂಕಿನ ರೀಜನಲ್ ಮೇನೇಜರ್
ಶ್ರೀ ದಾಮೋದರ್, ಕುಂಜತ್ತೂರು
ಕೇರಳ ಗ್ರಾಮೀಣ ಬ್ಯಾಂಕಿನ ಮೇನೇಜರ್
ಶ್ರೀ ಶೇಷಾಚಲ, ಉದ್ಯಾವರ
ಬೋವಿ ವಿದ್ಯಾದಾಯಿನಿ ಸಂಘ'ದ
ಕೋಶಾಧಿಕಾರಿ ಶ್ರೀ ವಿಶ್ವನಾಥ
ಸಿ ಉದ್ಯಾವರ್, ಪಿ.ಟಿ.ಎ
ಅಧ್ಯಕ್ಷ ಶ್ರೀ ಚಂದ್ರಶೇಖರ್
ಉಪಸ್ಥಿತರಿದ್ದರು. ಇದೇ
ಸಂದರ್ಭದಲ್ಲಿ ಕೊಡೆ ವಿತರಿಸಿದ
ಕೇರಳ ಗ್ರಾಮೀಣ ಬ್ಯಾಂಕ್ ಹಾಗೂ
ಸಹಕರಿಸಿದ ಶ್ರೀ ಭಾಸ್ಕರ್ ಕೆ
ಉದ್ಯಾವರ್ ಅವರಿಗೆ ಶಾಲಾ ಪ್ರಬಂದಕ
ಶ್ರೀ ವಿಶ್ವನಾಥ ಪಿ ಉದ್ಯಾವರ್
ಧನ್ಯವಾದವನ್ನಿತ್ತರು. ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಜಲಜಾಕ್ಷಿ ಎ ಯವರು ಸ್ವಾಗತಿಸಿ,
ಶಾಲಾ ಅಧ್ಯಾಪಿಕೆಯಾದ
ಶ್ರೀಮತಿ ಗೀತಾ ಎ ವಂದಿಸಿದರು.
ಅಧ್ಯಾಪಕ ಶ್ರೀ
ಜಯಪ್ರಶಾಂತ್ ಪಿ ಯವರು ಕಾರ್ಯಕ್ರಮ
ನಿರೂಪಿಸಿದರು.
No comments:
Post a Comment